ಕಾಣಿಯೂರು: ಖುರ್ರತುಸ್ಸಾದಾತ್ ಸಯ್ಯದ್ ಫಝಲ್ ಕೋಯಮ್ಮ ತಂಙಳ್ ರವರ ಮೊದಲ ಉರೂಸ್ ಮುಬಾರಕ್ ಜೂನ್ 26-29ರಂದು ನಡೆಯಲಿದೆ
ಕಾಣಿಯೂರು: ದಕ್ಷಿಣ ಕನ್ನಡದ ಸಂಯುಕ್ತ ಖಾಝಿ ಹಾಗೂ ಕೇಂದ್ರ ಮುಶಾವರ
ಸದಸ್ಯರಾಗಿದ್ದ ಖುರ್ರತುಸ್ಸಾದಾತ್ ಸಯ್ಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ರವರ ಒಂದನೇ ಉರೂಸ್ ಮುಬಾರಕ್ ಕಾರ್ಯಕ್ರಮ ಜೂನ್ 26, 27, 28 ಮತ್ತು 29ರಂದು ವಿಜೃಂಭಣೆಯಿಂದ ನಡೆಯಲಿದ್ದು, ಈ ಪ್ರಯುಕ್ತ ಸ್ವಾಗತ ಸಮಿತಿ ರಚಿಸಲಾಗಿದೆ.
ಈ ಮಹತ್ವಪೂರ್ಣ ಧಾರ್ಮಿಕ ಕಾರ್ಯಕ್ರಮವು ಕೂರತ್ ತಂಙಳ್ ದರ್ಗಾ ಪ್ರದೇಶದಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಂಙಳರ ಸುಪುತ್ರರಾದ ಸಯ್ಯದ್ ಅಬ್ದುರ್ರಹ್ಮಾನ್ ಮಶ್ಹೂದ್ ತಂಙಳ್ ವಹಿಸಿದರು. ಈ ವೇಳೆ ಅಸ್ಸಯ್ಯದ್ ಸಾದಾತ್ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ನೌಫಲ್ ಸಖಾಫಿ ಕಳಸ ಅವರು ಮುಖ್ಯ ಪ್ರಭಾಷಣ ಮಾಡಿ ಉರೂಸ್ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡವರು:
ಯೇನೆಪೋಯಾ ಯುನಿವರ್ಸಿಟಿ ಅಧ್ಯಕ್ಷ ವೈ. ಮುಹಮ್ಮದ್ ಕುಂಜಿ ಹಾಜಿ
ಯು ಟಿ ಇಫ್ತಿಕಾರ್
ವಳವೂರು ಸಅದಿ
ಜಿ ಎಂ ಉಸ್ತಾದ್
ಕೆ ಎಂ ಸಿದ್ದೀಕ್ ಮೋಂಟುಗೋಳಿ
ಗುಲಾಮ್ ಅಹ್ಮದ್ ಹಾಜಿ
ರಜಬ್ ಸಾಹಿಬ್ ಸುಫ್ಯಾನ್ ಸಖಾಫಿ
ಬಿ ಎಸ್ ಮುಹಮ್ಮದ್ ಫೈಝಿ
ಖೈರುಲ್ಲಾಹ್
ರಫೀಕ್ ಅಮಾನಿ ಕಣ್ಣೂರು
ಅಬೂಬಕರ್ ಕೂರತ್
ಇವರು ಎಲ್ಲರೂ ತಂಙಳ್ ರವರ ಉರೂಸ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.